Posts

ಐಡಿಯಾಲಜಿ ಮತ್ತು ಸಂಘರ್ಷ: ವಿಚಾರವಾದದ ಒಂದು ದೀರ್ಘ ಇತಿಹಾಸ

  ಆಧುನಿಕ ಪ್ರಪಂಚಕ್ಕೇ ಚಾರಿತ್ರಿಕವಾಗಿ ಅನನ್ಯವಾದ ಒಂದು ರೀತಿಯ ಸಂಘರ್ಷವಿದೆ. ಅದೇ ಐಡಿಯಲಾಜಿಕಲ್ ಸಂಘರ್ಷ. ಆಧುನಿಕ ಇತಿಹಾಸದ ಅತೀ ಮುಖ್ಯ ಸಂಘರ್ಷಗಳನ್ನು ಗಮನಿಸಿದರೆ ಇದರ ಅಳವು ತಿಳಿಯುತ್ತದೆ. ೧೬೪೨-೫೧ರ ನಡುವೆ ನಡೆದ ಇಂಗ್ಲಿಶ್ ಸಿವಿಲ್ ವಾರ್ ರಾಜ್ಯಧಿಕಾರ ಮತ್ತು ಧಾರ್ಮಿಕ ಸ್ವಾತಂತ್ರದ ಕುರಿತ ಎರಡು ವಿರುದ್ಧ ಐಡಿಯಾಲಜಿಗಳನ್ನು ಪ್ರತಿಪಾದಿಸಿದ ಸಂಸತ್ ಪರರ ಪಕ್ಷ ಮತ್ತು ರಾಜಾಧಿಕಾರದ ಪಾರಂಪರಿಕ ವ್ಯವಸ್ಥೆಯನ್ನು ಬೆಂಬಲಿಸಿದ ಅರಸೊತ್ತಿಗೆಯ ಪರರ ಪಕ್ಷದ ವಿರುದ್ಧ ನಡೆದ ನಾಗರಿಕ ದಂಗೆ. ೧೭೮೯ರ ಫ್ರೆಂಚ್ ಕ್ರಾಂತಿ ನಡೆದಿದ್ದು ಕೇವಲ ಒಂದು ರಾಜಸತ್ತೆಯ ವಿರುದ್ಧವಲ್ಲ. ಅದರ ಲಕ್ಷ್ಯ ಇದ್ದದ್ದು ಅರಸೊತ್ತಿಗೆಯ ವ್ಯವಸ್ಥೆಯನ್ನೇ ಸಮಾಜದಿಂದ ತೆಗೆದುಹಾಕುವುದರಲ್ಲಿ. ಅಂದರೆ , ಅದು ಸಮಾಜವನ್ನು ಕುರಿತ ಒಂದು ನಿರ್ದಿಷ್ಟ ಐಡಿಯಾಲಜಿಯ ಆಧಾರದ ಮೇಲೆ ನಡೆದ ಒಂದು ‍‌ದಂಗೆ , ಅಥವಾ ಕ್ರಾಂತಿ. ಹಾಗೆಯೇ , ೧೯೧೭ರ ರಷ್ಯನ್ ಕ್ರಾಂತಿ. ಅದಂತೂ ಕೇವಲ ರಷ್ಯಾದ ಝಾರ್ ರಾಜಸತ್ತೆಯನ್ನು ಉರುಳಿಸುವುದಷ್ಟೇ ಅಲ್ಲದೇ ಒಂದು ನಿರ್ದಿಷ್ಟ ರೀತಿಯ ಪ್ರಭುತ್ವವನ್ನು ಹುಟ್ಟುಹಾಕಲು ಹವಣಿಸಿದ ಕ್ರಾಂತಿ. ಒಂದು ದೇಶದ ಸಂಪತ್ತು ಮತ್ತು ಉತ್ಪಾದನಾ ಸಾಮರ್ಥ್ಯವನ್ನೂ ಜೊತೆಗೇ ಬೌದ್ಧಿಕ ಮತ್ತು ಧಾರ್ಮಿಕ ಚಿಂತನೆಯನ್ನೂ ಸರಕಾರವೇ ನಿರ್ದೇಶಿಸುವ ಮಹತ್ವಾಕಾಂಕ್ಷೆಯ ಉದ್ಯಮ ಅದು. ಚೈನಾದ ೧೯೪೯ರ ಕ್ರಾಂತಿಯೂ ಅಷ್ಟೇ. ಮಾವೋನ ಚೈನಾ ಪ್ರಜಾ ಗಣರಾಜ್ಯ ಜನ್ಮ ತಾಳಿದ್ದು ರಾಷ್ಟ್ರೀಯವ

ಪ್ರಾಯೋಗಿಕ ಚಿಂತನೆಯಲ್ಲಿ ಆಚಾರಕೇಂದ್ರಿತ ಮತ್ತು ಭೋಗ್ಯಕೇಂದ್ರಿತ ಮಾದರಿಗಳ ಕುರಿತು

-೧- ಬದುಕಿನ ಕುರಿತು, ಬದುಕುವ ಕುರಿತು, ಸಮಾಜದ ಕುರಿತು, ರಾಜಕೀಯದ ಕುರಿತು, ಸರಿ ತಪ್ಪುಗಳ ಕುರಿತು, ಈ ಎಲ್ಲಾ ರೀತಿಯ ಪ್ರಶ್ನೆಗಳ ಕುರಿತೂ ಮಾಡುವ ಚಿಂತನೆಯನ್ನು ಪ್ರಾಯೋಗಿಕ ಚಿಂತನೆ ಎನ್ನುವ ಹೆಸರಿನಿಂದ ಕರೆಯೋಣ. ಈ ಲೇಖನದಲ್ಲಿ ಪ್ರಾಯೋಗಿಕ ಚಿಂತನೆಯಲ್ಲಿರಬಹುದಾದ ಎರಡು ವಿಧಗಳನ್ನು ಪರಿಚಯಿಸುವುದು ನನ್ನ ಉದ್ದೇಶ. ಅದರ ಹಿಂದಿರುವ ನನ್ನ ಗ್ರಹಿಕೆಯನ್ನು ಹೀಗೆ ರೂಪಿಸಿಕೊಳ್ಳಬಹುದು - ಐತಿಹಾಸಿಕವಾಗಿ, ಅದರಲ್ಲೂ ವಿಶೇಷವಾಗಿ ಆಧುನಿಕ ಜಗತ್ತಿನಲ್ಲಿ, ಪ್ರಾಯೋಗಿಕ ಚಿಂತನೆಯೊಳಗೇ ಎರಡು, ವಿರುದ್ಧವಲ್ಲದಿದ್ದರೂ ಸಮನ್ವಯವಿಲ್ಲದ, ಚಿಂತನಾ ಧಾರೆಗಳಿವೆ. ಒಂದು ಆಚಾರಕೇಂದ್ರಿತವಾದದ್ದು. ಇನ್ನೊಂದು ಭೋಗ್ಯಕೇಂದ್ರಿತವಾದದ್ದು. ಇದನ್ನು ನಾನು ಇಂಗ್ಲಿಷಿನಲ್ಲಿ ಕ್ರಮವಾಗಿ practice model ಮತ್ತು deserts model ಎಂದು ಅನುವಾದಿಸುತ್ತೇನೆ. ಸ್ಥೂಲವಾಗಿ, ಆಚಾರಕೇಂದ್ರಿತ ಚಿಂತನೆ ಒಂದು ಕಾರ್ಯಕ್ಷೇತ್ರವನ್ನು ಮಾಡಬೇಕಾದ ಕ್ರಿಯಾಕರ್ಮಗಳು ಮತ್ತು ಪಾಲಿಸಬೇಕಾದ ನೇಮಗಳು ಎನ್ನುವ ದೃಷ್ಟಿಕೋನದಿಂದ ನೋಡುತ್ತದೆ. ಅದೇ, ಭೋಗ್ಯಕೇಂದ್ರಿತ ಚಿಂತನೆ ಅದೇ ಕಾರ್ಯಕ್ಷೇತ್ರವನ್ನು ಅದರಿಂದ ಹುಟ್ಟುವ ಫಲಗಳನ್ನು ಮತ್ತು ಅದರಿಂದ ಉಂಟಾಗುವ ಪರಿಣಾಮಗಳನ್ನು ಯಾವ ರೀತಿಯಲ್ಲಿ ಹಂಚಬೇಕು ಎನ್ನುವ ದೃಷ್ಟಿಕೋನದಿಂದ ಹೊರಡುತ್ತದೆ. ಯಾರು ಯಾವ ಫಲಗಳಿಗೆ ಎಷ್ಟರ ಮಟ್ಟಿಗೆ ಮತ್ತು ಯಾಕೆ ಭಾಜನರು ಎನ್ನುವುದು ಇಲ್ಲಿಯ ಕಾಳಜಿ. ಇಲ್ಲಿ ಕೇವಲ ಇಷ್ಟವಾದ ಫಲಗಳ ಕುರಿತು ಮಾತ್ರವಲ್ಲ,

ವಿದ್ಯಾಸಂಸ್ಥೆಗಳು ಮತ್ತು ಶೈಕ್ಷಣಿಕ ಪರಿಸರ

ಈಗ ಕೆಲವು ವರ್ಷಗಳ ಹಿಂದೆ ಅಮೆರಿಕಾದ ಇಲ್ಲಿನೋಯ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು ಕರ್ನಾಟಕದ ವಿದ್ಯಾಸಂಸ್ಥೆಗಳ ಒಂದು ಅಧ್ಯಯನ ಮಾಡಲು ಬಂದಿದ್ದರು. ಅವರ ಅಧ್ಯಯನದ ಉದ್ದೇಶ ವಿದ್ಯಾಸಂಸ್ಥೆಗಳು ಎಷ್ಟು ಚೆನ್ನಾಗಿ ಅಥವಾ ಸಾಧಾರಣವಾಗಿ ಕೆಲಸ ಮಾಡುತ್ತಿವೆ ಎಂದು ನೋಡುವುದಲ್ಲ. ಬದಲಾಗಿ, ಈ ವಿದ್ಯಾಸಂಸ್ಥೆಗಳು ಒಟ್ಟಾರೆಯಾಗಿ ಯಾವ ರೀತಿಯ ಶೈಕ್ಷಣಿಕ ಪರಿಸರದಲ್ಲಿ ಕೆಲಸಮಾಡುತ್ತಿವೆ ಮತ್ತು ತಮ್ಮತಮ್ಮ ಶೈಕ್ಷಣಿಕ ಪರಿಸರದ ಕುರಿತು ಆ ಸಂಸ್ಥೆಗಳಿಗೆ ಎಷ್ಟು ತಿಳುವಳಿಕೆ ಇದೆ ಎಂದು ನೋಡುವುದು ಅವರ ಉದ್ದೇಶ. ಅಂದರೆ, ತಮ್ಮ ವಿದ್ಯಾಸಂಸ್ಥೆಗಳಿಗೆ ಬರುವ ವಿದ್ಯಾರ್ಥಿಗಳ ಅಗತ್ಯಗಳೇನು, ಅಂತಹ ಅಗತ್ಯಗಳನ್ನು ಪೂರೈಸುತ್ತಿರುವ ಮಿಕ್ಕ ಎಷ್ಟು ವಿದ್ಯಾಸಂಸ್ಥೆಗಳು ಆ ಪ್ರದೇಶದಲ್ಲಿವೆ, ಆ ವಿದ್ಯಾಸಂಸ್ಥೆಗಳ ಜೊತೆ ನಾವು ಪೈಪೋಟಿ ಮಾಡುತ್ತಿದ್ದರೆ, ಅವರಿಗಿಂತ ಭಿನ್ನವಾಗುವ ರೀತಿ ಹೇಗೆ, ಅಥವಾ, ಪೈಪೋಟಿ ಮಾಡದೇ ಇದ್ದರೆ, ಅವುಗಳ ಕೆಲಸಕ್ಕೂ ನಮ್ಮ ಸಂಸ್ಥೆಯ ಕೆಲಸಕ್ಕೂ ಧ್ಯೇಯೋದ್ದೇಶಗಳು ಪೂರಕವಾಗಿರುವಂತೆ ನೋಡಿಕೊಳ್ಳುವುದು ಹೇಗೆ, ನಮ್ಮ ವಿದ್ಯಾರ್ಥಿಗಳು ಯಾವ ರೀತಿಯ ಸಂಸ್ಥೆಗಳಿಂದ ನಮ್ಮಲ್ಲಿಗೆ ಬರುತ್ತಿದ್ದಾರೆ ಮತ್ತು ಯಾವ ರೀತಿಯ ಉದ್ಯೋಗದ ಅಥವಾ ಉನ್ನತ ವ್ಯಾಸಂಗದ ಸಂಸ್ಥೆಗಳಿಗೆ ನಮ್ಮಲ್ಲಿಂದ ಹೋಗುತ್ತಿದ್ದಾರೆ, ನಮ್ಮ ಪರಿಸರದ ಅಗತ್ಯಕ್ಕೆ ತಕ್ಕಂತೆ ಶಿಕ್ಷಣ ನೀಡುವುದಕ್ಕೆ ನಮಗೆ ಯಾವ ರೀತಿಯ ತಜ್ಞತೆ ಇರುವ ಶಿಕ್ಷಕರು ಬೇಕು, ನಮ್ಮ ಕ್ಷೇತ್ರದಲ್ಲಿ

ಅಗ್ನಿ ಎಂಬ ರೂಪಕ

ಪ್ರಾಚೀನರಿಗೆ ಅಗ್ನಿ ನಮ್ಮ ಪ್ರಜ್ಞೆಯ ರೂಪಕ. ನಮ್ಮ ಪ್ರಜ್ಞೆ ಪ್ರಪಂಚವನ್ನು ಭಕ್ಷಿಸಿ ಬೆಳಗುತ್ತದೆ. ಅಗ್ನಿ ಇಂಧನವನ್ನು ಭಕ್ಷಿಸಿ ಬೆಳಗುವಂತೆ. ದಹಿಸುವ ಯಾವ ವಸ್ತುವಾದರೂ ಸರಿಯೆ ಅದು ಅಗ್ನಿಗೆ ಇಂಧನವಾಗಿ ಸಲ್ಲುತ್ತದೆ. ವಸ್ತುಗಳನ್ನು ಹಲವು ಹೆಸರುಗಳಿಂದ ಮತ್ತು ರೂಪಗಳಿಂದ ಗುರುತಿಸುತ್ತೇವೆ. ಇದು ಆಟಿಕೆ, ಇದು ಕುರ್ಚಿ ಎಂದು. ಆದರೆ, ಅಗ್ನಿಗೆ ವಸ್ತುಗಳ ಬಗ್ಗೆ ಯಾವ ತಾರತಮ್ಯವೂ ಇಲ್ಲ. ವಸ್ತುವಿನ ರೂಪ ಏನೇ ಇರಲಿ, ಅಗ್ನಿಗೆ ಅದು ಸಲ್ಲುವುದು ಇಂಧನವಾಗಿ ಮಾತ್ರ. ಹೇಗಿದ್ದರೂ, ಅಗ್ನಿಗೆ ಸಂದಮೇಲೆ ಆ ವಸ್ತುವಿನ ನಾಮರೂಪ ಭೇದಗಳೆಲ್ಲವೂ ಅಳಿದೇ ಹೋಗುತ್ತದಲ್ಲ. ನಮ್ಮ ಪ್ರಜ್ಞೆಗೆ ಸಲ್ಲುವ ಪ್ರಪಂಚದ ವಸ್ತುಗಳೂ ಹೀಗೆಯೇ. ಅವು ನಮ್ಮ ಸುಖಕ್ಕೆ ಬೇಕು. ಅನ್ನ, ನೀರು, ಹಣ, ಕೀರ್ತಿ, ಆರೋಗ್ಯ, ದೇಹಸೌಂದರ್ಯ ಇವೆಲ್ಲವೂ ನಮ್ಮ ಪ್ರಜ್ಞೆಗೆ, ಅಂದರೆ ನಮಗೆ, ಬೇಕೇಬೇಕು. ಆದರೆ, ಈ ಎಲ್ಲ ವಸ್ತುಗಳೂ ಬೇಕಿರುವುದು ಪ್ರಜ್ಞೆಗೆ ಇಂಧನವಾಗಿ ಮಾತ್ರ. ಅದರ ನಿರ್ದಿಷ್ಟ ರೂಪ, ಹೆಸರು, ಲಕ್ಷಣಗಳೆಲ್ಲಾ ಸಾಂದರ್ಭಿಕ ಮಾತ್ರ. ಇಂತಹ ಇಂಧನವನ್ನು ಕೊಟ್ಟಷ್ಟೂ ನಮ್ಮ ಪ್ರಜ್ಞೆ ಉರಿಯುತ್ತಲೇ ಇರುತ್ತದೆ. ಎಲ್ಲಿಯವರೆಗೂ ನಮ್ಮ ಪ್ರಜ್ಞೆ ಪ್ರಪಂಚವನ್ನು, ಅದರ ವಸ್ತುಗಳನ್ನು, ತನ್ನ ಇಂಧನವನ್ನಾಗಿ ಭಕ್ಷಿಸುತ್ತಿರುತ್ತದೋ ಅಲ್ಲಿಯವರೆಗೂ ನಾವು ಜೀವಂತವಾಗಿದ್ದೇವೆ ಎಂದರ್ಥ.  ಇಲ್ಲಿಯೇ ಒಂದು ಪ್ರಶ್ನೆಯೂ ಏಳುತ್ತದೆ. ನಮಗೆ ವಸ್ತುಗಳು ಇಷ್ಟವಾಗುವುದು ನಿರ್ದಿಷ್ಟ ವಸ್ತ

ಲೋಕನಿಂದೆಗೆ ಹೆದರುವ ಸಜ್ಜನರು

ಕೆಟ್ಟ ಕೆಲಸ ಮಾಡಬಾರದು. ಯಾಕೆ? ಅದಕ್ಕೆ ಎರಡು ಉತ್ತರ. ಮೊದಲನೆಯದು: “ಹಾಗೆ ಮಾಡಿದರೆ ನಾಲ್ಕು ಜನರ ಮುಂದೆ ನಮ್ಮ ಮರ್ಯಾದೆ ಏನಾಗುತ್ತದೆ?” ಎರಡನೆಯದು: “ನನ್ನ ನೈತಿಕ ನಂಬಿಕೆಗಳಿಗೆ ವಿರುದ್ಧವಾಗಿರುವ ಏನನ್ನೂ ನಾನು ಮಾಡುವುದಿಲ್ಲ”.  ಚಿಕ್ಕಂದಿನಲ್ಲಿ ಏನಾದರೂ ಮಾಡಬಾರದ್ದು ಮಾಡಿ ಸಿಕ್ಕಿಹಾಕಿಕೊಂಡರೆ, ನಮ್ಮಜ್ಜಿ, ನಮ್ಮಮ್ಮ ಎಲ್ಲರೂ ನನ್ನನ್ನು ಬೈಯುತ್ತಿದ್ದದ್ದು “ನಾಲ್ಕು ಜನ ನೋಡಿ ನಗ್ತಾರೆ. ನಾಚಿಕೆ ಆಗ್ಬೇಕು ನಿನಗೆ” ಅಂತ. ಆದರೆ ಅವರೆಲ್ಲಾ ಹಳೆಯ ಕಾಲದವರು. ಸಮಾಜದ ಬಗೆಗಿನ ಭಯದಿಂದ ನಾವು ನೀತಿವಂತರಾಗಿರಬೇಕು ಎನ್ನುವವವರು. ನನ್ನ ಸ್ನೇಹಿತರು ಹಾಗಲ್ಲ. ಬಹಳ ಆಧುನಿಕರು. ಅವರೂ ಒಳ್ಳೆಯವರೇ. ಆದರೆ ಅವರಿಗೆ ಸಮಾಜದ ಭಯದಿಂದ ಒಳ್ಳೆಯವರಾಗಿರುವುದು ಆಷಾಢಭೂತಿಗಳ ಲಕ್ಷಣ ಎಂದು ಕಾಣಿಸುತ್ತದೆ. ನಾವು ನಮ್ಮ ನೈತಿಕ ಮೌಲ್ಯಗಳನ್ನು ಪಾಲಿಸಬೇಕೇ ಹೊರತೂ ಇನ್ನೊಬ್ಬರ ಬಗೆಗಿನ ಭಯಕ್ಕಾಗಿ ಒಳ್ಳೆಯವರಾಗಿರಬಾರದು. ಇಬ್ಬರಲ್ಲಿ ಯಾರು ಸರಿ? ನನ್ನ ಪ್ರಕಾರ, ನನ್ನ ಅಜ್ಜಿಯೇ ಸರಿ. ಯಾಕೆ? ಸರಿ-ತಪ್ಪುಗಳು ಕೂಡಾ ಬೆಟ್ಟಗುಡ್ಡಗಳಂತೆ ನಮ್ಮ ಪ್ರಪಂಚದ ಸತ್ಯಗಳೇ ಹೊರತೂ ನಮ್ಮ ಮನಸ್ಸಿನ ಖಯಾಲಿಗಳಲ್ಲ. ಸರಿ-ತಪ್ಪುಗಳನ್ನು ನಾವೇ ಮಾಡಿಕೊಂಡಿರುವುದಲ್ಲವೇ ಎಂದು ನೀವು ಕೇಳಬಹುದು. ಹೌದು. ಆದರೆ, ನೀರಿನ ಕೆರೆಗಳನ್ನೂ ನಾವೇ ಮಾಡಿಕೊಂಡಿರುವುದು. ಅಷ್ಟು ಮಾತ್ರಕ್ಕೆ ಅವೇನೂ ಕಡಿಮೆ ಸತ್ಯಗಳಾಗುವುದಿಲ್ಲವಲ್ಲ? ನಾವೇ ಮಾಡಿಕೊಂಡಿದ್ದು ಎಂದು ಕೆರೆಯಲ್ಲಿ

ನೆಟ್ಟಗೆ ಯೋಚಿಸಲು ಹತ್ತು ಸೂತ್ರಗಳು

ನಾವೆಲ್ಲಾ ಸ್ಕೂಲು ಕಾಲೇಜಿಗೆ ಹೋಗಿ ಬುದ್ಧಿವಂತರಾಗುತ್ತೇವೆ ಎಂದು ಲೆಕ್ಕ. ಅಂದರೆ ವೈಜ್ಞಾನಿಕವಾಗಿ ಯೋಚಿಸಲು ಪ್ರಾರಂಭಿಸುತ್ತೇವೆ ಎಂದರ್ಥ. ಸ್ಕೂಲು ಕಾಲೇಜುಗಳು ವೈಜ್ಞಾನಿಕ ಮನೋಭಾವನೆ ಎನ್ನುವಂಥ ರೀತಿಯ ಯಾವುದೋ ಒಂದು ವಿಶೇಷ ಶಕ್ತಿಯನ್ನು ಬೆಳೆಸುತ್ತವೆ ಎಂದು ನಮ್ಮ ನಂಬಿಕೆ. ಆದರೆ, ಇಲ್ಲೊಂದು ಎಡವಟ್ಟಿದೆ. ವೈಜ್ಞಾನಿಕ ಚಿಂತನೆ ಎನ್ನುವ ಮಾದರಿಯ ಯಾವ ಚಿಂತನೆಯೂ ಈ ಪ್ರಪಂಚದಲ್ಲಿಲ್ಲ. ಅಥವಾ, ಹೀಗೆ ಯೋಚನೆ ಮಾಡಿದರೆ ಅದು ವೈಜ್ಞಾನಿಕ, ಹಾಗೆ ಯೋಚನೆ ಮಾಡಿದರೆ ಅದು ಅವೈಜ್ಞಾನಿಕ ಎನ್ನುವ ಯಾವ ಕಾಯ್ದೆ ಪುಸ್ತಕವೂ ಇಲ್ಲ. ಹಾಗಾಗಿ, ಈ ವೈಜ್ಞಾನಿಕ ಮನೋಭಾವದ ಹಿಂದೆ ಬಿದ್ದರೆ ಹಳ್ಳ ಹತ್ತುವುದು ಗ್ಯಾರಂಟಿ. ಇದರಿಂದ ತಪ್ಪಿಸಿಕೊಳ್ಳಬೇಕೆಂದರೆ ಸ್ವಲ್ಪ ಚಾಲಾಕಿತನ ಉಪಯೋಗಿಸಬೇಕು. ಅಂತಹ ಚಾಲಾಕಿತನದ ಹತ್ತು ಉಪಾಯಗಳು ಇಲ್ಲಿವೆ. ಆದರೆ, ಎಚ್ಚರ. ಇದು ಉಪಾಯಗಳು. ನಿಯಮಗಳಲ್ಲ. ಅಡ್ಡಾದಿಡ್ಡಿಯಾಗಿ ಬಳಸಿ ಇವು ಕೈಕೊಟ್ಟರೆ ಮತ್ತೆ ಬೇರೆಯವರು ಜವಾಬ್ದಾರರಲ್ಲ. ಸಾಮಾನ್ಯವಾಗಿ ಸ್ಕೂಲು ಕಾಲೇಜುಗಳು ಕಲಿಸುವುದು ದಡ್ಡರ ಸೂತ್ರ. ಅದರಾಚೆಗೆ ಇರುವುದು ಜಾಣರ ಸೂತ್ರ.  ದಡ್ಡರ ಸೂತ್ರ 1:  ಯಾವುದನ್ನು ಸರಿಯೆಂದು ಸಾಬೀತುಮಾಡಬಹುದೋ ಅದು ಮಾತ್ರ ವೈಜ್ಞಾನಿಕ.  ಜಾಣರ ಸೂತ್ರ 1:  ಯಾವುದನ್ನು ತಪ್ಪೆಂದು ಸಾಬೀತುಮಾಡುವ ಸಾಧ್ಯತೆ ಇದೆಯೋ ಅದು ಮಾತ್ರ ವೈಜ್ಞಾನಿಕ.  ಸಾಮಾನ್ಯವಾಗಿ ವಿಜ್ಞಾನ ಎಂದರೆ ಸರಿ ಎಂದು ಸಾಬೀತು ಮಾಡಬಹುದಾದದ್ದು ಎಂದು ನಮ್ಮ ನಂ